ನಗರದಲ್ಲಿ ಕೋವಿಡ್ ಕಾಣಿಸಿಕೊಳ್ಳುವ ಮೊದಲು (ಮಾರ್ಚ್ ತಿಂಗಳಲ್ಲಿ) ವಿದೇಶದಿಂದ ತಂದೆಯ ಜತೆಗೆ ಇಲ್ಲಿಗೆ ಬಂದ ಯುವತಿ, ತೀವ್ರ ನಿತ್ರಾಣರಾಗಿದ್ದರು. ಆ ವೇಳೆ ಯುವತಿಯ ತೂಕ 28 ಕೆ.ಜಿಗೆ ಇಳಿಕೆಯಾಗಿತ್ತು. ಅಪೌಷ್ಟಿಕತೆಯಿಂದಲೂ ಬಳಲುತ್ತಿದ್ದು, ಖಿನ್ನತೆಗೆ ಒಳಗಾಗಿದ್ದರು. ಸಣ್ಣ ಕರುಳಿನ ಗ್ಯಾಂಗ್ರೀನ್ ಚಿಕಿತ್ಸೆಗಾಗಿ ಗರ್ಭಪಾತ ಮಾಡಿಸಿಕೊಂಡಿದ್ದರು. ಈ ವೇಳೆ ಅವರ ರಕ್ತನಾಳದ ಮೂಲಕ ಗ್ಲೂಕೋಸ್ ಬಲದಿಂದ ಬದುಕುಳಿದಿದ್ದರು. ಸಣ್ಣ ಕರುಳಿನ ಸಮಸ್ಯೆ ಪತ್ತೆ ಮಾಡಿದಡಾ. ಮಹೇಶ್ ಗೋಪಸೆಟ್ಟಿ ಮತ್ತು ಡಾ.ಬಿ.ಎಸ್. ರವೀಂದ್ರ ನೇತೃತ್ವದ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು ಎಂದು ಆಸ್ಪತ್ರೆ ತಿಳಿಸಿದೆ.