‘ಹಲವು ವರ್ಷಗಳಿಂದ ಈ ದ್ವಾರವನ್ನು ಕ್ಲಬ್ ಬಳಸುತ್ತಿತ್ತು. ಕಳೆದ ವರ್ಷ ಕೋವಿಡ್ ಇದ್ದ ಕಾರಣದಿಂದ ಪ್ರವೇಶ ನಿರ್ಬಂಧಿಸಿದ್ದರು. ಬಳಿಕ ನಾವೇ ದ್ವಾರ ತೆರೆದಾಗ ಬ್ಯಾರಿಕೇಡ್ಗಳನ್ನು ಹಾಕಿದ್ದರು. ಈ ಜಾಗದಲ್ಲಿ ಪ್ರವೇಶಕ್ಕೆ ಅನುಮತಿ ಕೋರಿತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿರಾಜೇಂದ್ರಕುಮಾರ್ ಕಟಾರಿಯಾ ಅವರಲ್ಲಿ ಮನವಿ ಮಾಡಿದ್ದೆವು. ಆದರೆ, ಏಕಾಏಕಿ ಒಂದು ನೋಟಿಸ್ ಸಹ ನೀಡದೆ, ದ್ವಾರದ ರಸ್ತೆ ಅಗೆದಿದ್ದಾರೆ’ ಎಂದು ಸೆಂಚುರಿ ಕ್ಲಬ್ನ ಗೌರವ ಕಾರ್ಯದರ್ಶಿ ಇ.ಜಿ.ಜೈದೀಪ್ ಆಕ್ಷೇಪ ವ್ಯಕ್ತಪಡಿಸಿದರು.