ಈ ನಡುವೆ, ಅಕ್ಟೋಬರ್ 7ರಂದು ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ವಿದ್ಯಾರ್ಥಿ ನಿಲಯಕ್ಕೆ ಬದಲಿ ಜಾಗ ಗುರುತಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಸಕರ ಸೂಚನೆಯಂತೆ ಬದಲಿ ಜಾಗ (1 ಎಕರೆ) ಗುರುತಿಸಿ ಮಂಜೂರು ಮಾಡಿಕೊಡಲುತಹಶೀಲ್ದಾರ್ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ಪೂರ್ವ ತಾಲ್ಲೂಕಿನ ಸಹಾಯಕ ನಿರ್ದೇಶಕರು ಇದೇ 9ರಂದು ಪತ್ರ ಬರೆದಿದ್ದಾರೆ.