ಈಜು ಬರುತ್ತಿದ್ದ ಉಲ್ಲಾಸ್ ದಡ ಸೇರಿ ಸಹಾಯಕ್ಕಾಗಿ ಕೂಗಿದ್ದಾರೆ. ತಕ್ಷಣ ನಾಲ್ಕೈದು ಜನರು ರಕ್ಷಣೆಗೆ ಧಾವಿಸಿದರೂ ಸಚಿನ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.ರಾಮಮೂರ್ತಿನಗರ ಠಾಣೆಯ 20 ಸಿಬ್ಬಂದಿ, ಸಿವಿಲ್ ಡಿಫೆನ್ಸ್ನ 25 ಜನರ ತಂಡ, 30ಕ್ಕೂ ಹೆಚ್ಚು ಎಎನ್ಡಿಆರ್ಎಫ್ನ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳಗುತಜ್ಞರು ಶೋಧ ನಡೆಸಿದರೂ ಫಲಕಾರಿಯಾಗಲಿಲ್ಲ. ಆರಕ್ಕೂ ಹೆಚ್ಚು ದೋಣಿಗಳನ್ನು ಶೋಧ ಕಾರ್ಯಕ್ಕೆ ಬಳಸಲಾಗಿದೆ.