ಪೀಣ್ಯದಾಸರಹಳ್ಳಿ:‘ಕಾರ್ಗಿಲ್ ಯುದ್ಧದಲ್ಲಿ ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತೆತ್ತ ಸೈನಿಕರನ್ನು ನಾವು ಸ್ಮರಿಸಿಕೊಳ್ಳಬೇಕು' ಎಂದು ನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಂಗರಾಜು ಹೇಳಿದರು.
ಕಾರ್ಗಿಲ್ ವಿಜಯೋತ್ಸವ ನಿಮಿತ್ತ ನೆಲಗದರನಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ನಂತರ ಮಾತನಾಡಿದ ಅವರು, ‘ವೀರಯೋಧರ ದಿಟ್ಟ ಹೋರಾಟ ನಮಗೆಲ್ಲ ಸ್ಫೂರ್ತಿಯಾಗಬೇಕು’ ಎಂದರು.
ಬಿಜೆಪಿ ಮುಖಂಡ ಸಿ.ಎಂ.ನಾಗರಾಜ್, ‘ವೀರಯೋಧರ ದಿಟ್ಟತನದ ಹೋರಾಟ ನಮಗೆಲ್ಲ ಸ್ಫೂರ್ತಿ ತರುತ್ತದೆ' ಎಂದು ಅವರು ಹೇಳಿದರು.
ಜೆ.ವಿ.ಶ್ರೀನಿವಾಸ್ 'ಕಾರ್ಗಿಲ್ ಜಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಂಗರಾಜು, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸತೀಶ್, ಬಿಜೆಪಿ ಮುಖಂಡರುಗಳಾದ ಸಿ.ಎಂ.ನಾಗರಾಜು, ಜೆ.ವಿ.ಶ್ರೀನಿವಾಸ್, ನಾಗರಾಜು, ನಿಸರ್ಗ ಕೆಂಪರಾಜು, ಸಂದೀಪ್ ಸಿಂಗ್, ವಿನೋದ್ ಗೌಡ, ಸುರೇಶ್.ಜಿ ಇದ್ದರು