‘ಜಮೀನಿನ ಮಂಜೂರಾತಿ ನೈಜತೆಯನ್ನು ಪರಿಶೀಲಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೋರಿತ್ತು. ಈ ಸರ್ವೆ ನಂಬರ್ನಲ್ಲಿ ಐವರು ಮಂಜೂರುದಾರರಿಗೆ 17 ಎಕರೆ 35 ಗುಂಟೆ ಜಮೀನು ಖಾತೆ ದಾಖಲು ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆ. ನ್ಯಾಯಾಲಯದ ಆದೇಶದ ಪ್ರಕಾರ ಖಾತೆ ದಾಖಲು ಮಾಡುವಂತೆ ಜಿಲ್ಲಾಧಿಕಾರಿಯವರೇ ಖುದ್ದು ಆದೇಶ ನೀಡಿದ್ದರು. ಆದರೂ, 1978–79 ರಲ್ಲಿ ನಡೆದ ಈ ಭೂಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ವಿಶೇಷ ಜಿಲ್ಲಾಧಿಕಾರಿಗೂ 2020ರ ಜ 22ರಂದು ಪತ್ರ ಬರೆದಿದ್ದೆ. ಅವರು ನನ್ನಿಂದ ವಿವರಣೆ ಕೇಳದೆ ಆದೇಶ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.