ಬೆಂಗಳೂರು: ‘ನಾಡಿನ ಕೆಲಬುದ್ಧಿಜೀವಿಗಳು ರಫೇಲ್ ಹಗರಣ, ನೋಟು ರದ್ಧತಿ,ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಂತಹ (ಆರ್ಸಿಪಿಇ) ಬಹುದೊಡ್ಡ ಸಮಸ್ಯೆಗಳ ವಿಷಯಗಳ ಬಗ್ಗೆ ದನಿ ಎತ್ತಲಿಲ್ಲ. ಆದರೆ, ಅಕಾಡೆಮಿಗಗಳ ಅಧ್ಯಕ್ಷಗಿರಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸಲು ಮುಂದಿರುತ್ತಾರೆ’ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಟೀಕಿಸಿದರು.