ಯಶವಂತಪುರ ವ್ಯಾಪ್ತಿಗೆ ಒಳಪಡುವ ಏರೋಹಳ್ಳಿ ವಾರ್ಡ್ನಅಂಜನಾನಗರ, ಮುದ್ದನಪಾಳ್ಯ, ಬಿಇಎಲ್ ಬಡಾವಣೆ, ಬ್ಯಾಡರಹಳ್ಳಿ, ಕೆಂಪೇಗೌಡ ನಗರ, ಬಾಲಾಜಿನಗರ, ತುಂಗಾನಗರ, ಹೇರೋಹಳ್ಳಿ, ವೆಂಕಟೇಶ್ವರ ಲೇಔಟ್, ಮಹದೇಶ್ವರ ನಗರ, ಕೆಎಸ್ಆರ್ಟಿಸಿಬಡಾವಣೆಯ ಎಲ್ಲಾ ಪತ್ರಿಕಾ ವಿತರಕರಿಗೆಅಗತ್ಯ ಇರುವಷ್ಟು ಮಾಸ್ಕ್ಗಳನ್ನುನೀಡಲಾಯಿತು.
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್ಡೌನ್ಜಾರಿಯಾಗಿದೆ. ಇಂತಹ ಸಂದರ್ಭದಲ್ಲೂ ಜನರಿಗೆ ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸುತ್ತಿರುವ ಪತ್ರಿಕೆಗಳ ಪಾತ್ರ ಅತ್ಯಗತ್ಯವಾಗಿದೆ. ಸರ್ಕಾರದ ಆದೇಶಗಳು,ಕೊರೊನಾ ತಡೆಗಟ್ಟುವಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪತ್ರಿಕೆಗಳು ಓದುಗರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.