ಐದು ಜಿಲ್ಲೆಗಳಲ್ಲಿ ಶೂನ್ಯ:ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ, ಕಲಬುರ್ಗಿಯಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 467, ದಕ್ಷಿಣ ಕನ್ನಡ 357, ಮೈಸೂರು 162, ಉಡುಪಿ 78, ಬೆಳಗಾವಿ 69, ತುಮಕೂರು 59, ಚಾಮರಾಜನಗರ 54, ಹಾಸನ 57 ಹಾಗೂ ಶಿವಮೊಗ್ಗದಲ್ಲಿ 52 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 8 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ.