ಕಾಂಗ್ರೆಸ್ನ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ’ಮೊದಲ ಹಂತದಲ್ಲಿ ನೆಲಮಂಗಲಕ್ಕೆ (₹673 ಕೋಟಿ ವೆಚ್ಚ), ಬಳಿಕ ದಾಬಸ್ಪೇಟೆಗೆ (₹410 ಕೋಟಿ ವೆಚ್ಚ) ಹಾಗೂ ನಂತರ ದೊಡ್ಡಬಳ್ಳಾಪುರಕ್ಕೆ (₹415) ಸಂಸ್ಕರಿಸಿದ ನೀರು ಪೂರೈಸಲಾಗುವುದು. ದೊಡ್ಡಬಳ್ಳಾಪುರದ ಜನರಿಗೆ ಯೋಜನೆಯ ಲಾಭ ಸಿಗಲು ಎರಡು ವರ್ಷಗಳು ಬೇಕು‘ ಎಂದು ಹೇಳಿದರು.