‘ಕೆರೆ ಪಕ್ಕದ ರಸ್ತೆಯಲ್ಲಿ ಬೀದಿನಾಯಿಗಳು ಗುಂಪು ಕಟ್ಟಿಕೊಂಡು ನಿಂತಿದ್ದವು. ಅದೇ ಮಾರ್ಗವಾಗಿ ಮುನಿಯಲ್ಲಪ್ಪ ಬೈಕ್ನಲ್ಲಿ ಹೊರಟಿದ್ದರು. ಅವರನ್ನು ಗುರಾಯಿಸಿ ಬೊಗಳಲಾರಂಭಿಸಿದ್ದ ನಾಯಿಗಳು ಬೆನ್ನಟ್ಟಿದ್ದವು. ಹೆದರಿದ ಮುನಿಯಲ್ಲಪ್ಪ, ನಾಯಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಭಯದಲ್ಲಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿದ್ದರು.’