ಶಾಸಕ ರಾಮಲಿಂಗಾ ರೆಡ್ಡಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಸುರಕ್ಷತೆ, ಬೀದಿಬದಿ ವ್ಯಾಪಾರ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದ ಜನಪರ ಕಾಯ್ದೆಗಳನ್ನು ರೂಪಿಸಲಾಯಿತು. ಬಳಿಕ ಬಂದ ಸರ್ಕಾರ ಈ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಆಸಕ್ತಿ ತೋರಿಲ್ಲ. ನಾವು ₹1 ಕೆಲಸಕ್ಕೆ 10 ಪೈಸೆ ಪ್ರಚಾರ ಪಡೆದುಕೊಂಡೆವು. ಈಗಿನ ಸರ್ಕಾರ 10 ಪೈಸೆ ಕೆಲಸ ಮಾಡಿ ₹1 ಪ್ರಚಾರ ಪಡೆದುಕೊಳ್ಳುತ್ತಿದೆ’ ಎಂದರು.