ಇದನ್ನು ತಳ್ಳಿ ಹಾಕಿದ ಬಿಬಿಎಂಪಿ ಪರ ವಕೀಲರು, ‘ಕೆರೆಯ ಸುತ್ತ ಸಂಚಾರ ಮಾದರಿಯ ಪಥವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಿಮೆಂಟ್, ಮರಳು ಬಳಸು ತ್ತಿಲ್ಲ. ಕೇವಲ ಕೆರೆಯ ಹೂಳನ್ನು ಸುರಿಯಲಾಗುತ್ತಿದೆ. ಈ ಪಥದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಕೆರೆಗಳ ನಿರ್ವಹಣೆಗಷ್ಟೇ ಇದು ಮೀಸಲಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.