‘ಜುಲೈ 10ರ ಈ ಘಟನೆ ಸಂಬಂಧ ಎನ್.ಪಿ. ಅಮೃತೇಶ್ ಎಂಬುವರು ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿ ಸುಧಾಕರ್ ಅವರ ಹೇಳಿಕೆ ಪಡೆದು ಶನಿವಾರವಷ್ಟೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು. ಚಿಕ್ಕಬಳ್ಳಾಪುರ ಶಾಸಕ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆಗಿದ್ದ ಸುಧಾಕರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಜುಲೈ 10ರಂದು ವಿಧಾನಸೌಧಕ್ಕೆ ಬಂದಿದ್ದರು.