ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ನೂತನ ಕುಲಪತಿಯನ್ನಾಗಿ ಪ್ರೊ. ಸುಧೀರ ಕೃಷ್ಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ನ್ಯಾಯಮೂರ್ತಿ ಎಸ್.ಎ ಬೋಬ್ಡೆ ನೇತೃತ್ವದ ಕಾರ್ಯಕಾರಿ ಮಂಡಳಿಯು ಈ ತೀರ್ಮಾನ ಕೈಗೊಂಡಿದೆ. ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಇತ್ತೀಚೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು.
ಸುಧೀರ ಕೃಷ್ಣಸ್ವಾಮಿ, ಪ್ರೊ. ಶಶಿಕಲಾ ಗುರ್ಪುರ್ ಹಾಗೂ ಪ್ರೊ. ಶ್ರೀಕೃಷ್ಣ ದೇವರಾವ್ ಅವರ ಹೆಸರುಗಳನ್ನು ಸಮಿತಿಯು ಹುದ್ದೆಗೆ ಶಿಫಾರಸು ಮಾಡಿತ್ತು. ಅಂತಿಮವಾಗಿ ಸುಧೀರ್ ಅವರನ್ನು ನೇಮಕ ಮಾಡಲಾಗಿದೆ.