ಹೇಮಲತಾ ಸುರೇಶ್, ಲಲಿತಾ ಲಕ್ಷ್ಮೀನಾರಾಯಣ್ ಮತ್ತು ಕೆ.ಶ್ರೀನಿವಾಸ್ ಅವರು ಪುರಸಭಾ ಸದಸ್ಯರಾಗಿ 2019ರ ಮೇ 30ರಂದು ಆಯ್ಕೆಯಾಗಿದ್ದರು.ಚುನಾವಣಾ ವೆಚ್ಚದ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆಈ ಮೂವರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ 2021ರ ನವೆಂಬರ್ 15ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅನರ್ಹ ಸದಸ್ಯರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಆಯೋಗದ ಆದೇಶವನ್ನು ಹೈಕೋರ್ಟ್ 2022ರ ಏಪ್ರಿಲ್ 18ರಂದು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ದ್ವಿಸದಸ್ಯರ ಪೀಠದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಪೀಠ ವಜಾ ಮಾಡಿತ್ತು. ಇದೀಗ, ಅನರ್ಹ ಸದಸ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.