ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ತರಲು ರೈಲಿನಿಂದ ಇಳಿದವ ಶವವಾದ

Last Updated 2 ಜುಲೈ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ನೀರು ತರಲೆಂದು ರೈಲಿನಿಂದ ಕೆಳಗೆ ಇಳಿದಿದ್ದ ಪವನ್ (32) ಎಂಬುವರು ಹಳಿ ಮೇಲೆಯೇ ಶವವಾಗಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

‘ಬೀದರ್ ಜಿಲ್ಲೆಯ ಭಾಲ್ಕಿಯ ಪವನ್, ಕೃಷಿಕ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುವುದ
ಕ್ಕಾಗಿ ಪತ್ನಿ ಜೊತೆ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ವಾಪಸ್ ಊರಿಗೆ ಹೊರಟಿದ್ದಾಗಲೇ ಮೃತಪಟ್ಟಿದ್ದಾರೆ’ ಎಂದು ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಹೇಳಿದರು.

‘ಜೂನ್ 30ರಂದು ರಾತ್ರಿ ತಮ್ಮೂರಿಗೆ ಹೋಗಲೆಂದು ಪವನ್ ಹಾಗೂ ಪತ್ನಿ, ನಿಲ್ದಾಣಕ್ಕೆ ಬಂದು ರೈಲು ಹತ್ತಿದ್ದರು. ರೈಲು ಹೊರಡಲು ಕೆಲ ನಿಮಿಷ ಇರುವಾಗಲೇ ನೀರು ತರಲು ಪವನ್ ಕೆಳಗೆ ಇಳಿದಿದ್ದರು. ರೈಲು ಹೊರಟಾಗಲೂ ವಾಪಸ್ ಬಂದಿರಲಿಲ್ಲ.ಗಾಬರಿಗೊಂಡ ಪತ್ನಿ, ನಿಲ್ದಾಣದಲ್ಲೇ ಇಳಿದುಕೊಂಡು ಪತಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT