ಬೆಂಗಳೂರು ನಗರ ವಿಶ್ವವಿದ್ಯಾಲಯ, ಸಮರ್ಥ ಭಾರತ ಗುರುವಾರ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 'ಬಿ ಗುಡ್ ಡು ಗುಡ್ - 2023' ಅಭಿಯಾನದಲ್ಲಿ ಮಾತನಾಡಿದ ಅವರು, ‘ವಿವೇಕಾನಂದರು ಅಂದು ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ್ದು ಕೆಲವು ನಿಮಿಷವಾದರೂ, ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿದ್ದಾರೆ. ದೇಶದ ಬಡತನ ನೀಗಿದಾಗಷ್ಟೇ ಓದಿದವರನ್ನು ವಿದ್ಯಾವಂತರೆಂದು ಪರಿಗಣಿಸಬಹುದು. ಈ ಪರಿಸ್ಥಿತಿ ಬದಲಾಗಬೇಕಾದರೆ ಇಂಡಿಯಾ ‘ಭಾರತ’ವಾಗಬೇಕು. ಮಣ್ಣಿನ ಸಂಸ್ಕೃತಿ ಗೌರವಿಸುವುದು ನಿಜವಾದ ಶ್ರೀಮಂತಿಕೆ. ನಮ್ಮ ಸಂಸ್ಕೃತಿ ಉಳಿಸುವ ಮೂಲಕ ಸಮರ್ಥ, ಸಶಕ್ತ ಬಹುತ್ವ ಭಾರತ ನಿರ್ಮಿಸಬೇಕಿದೆ ಎಂದರು.