‘ಶಾಲೆಯು ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 2 ಬಿ, 13, 16, 17, 23 ಮತ್ತು 29ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ. ಶಾಲೆಯ ವಿವರ, ಶುಲ್ಕ, ಪ್ರವೇಶ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ನಮೂದಿಸಿಲ್ಲ. ಮಕ್ಕಳು ಕೂಡಾ ಭಯದಲ್ಲಿಯೇ ಕಲಿಯುತ್ತಿದ್ದಾರೆ.ನೆಲದ ಕಾನೂನುಗಳಾದ ಶಿಕ್ಷಣ ಹಕ್ಕು ಕಾಯಿದೆ (2009), ಶಿಕ್ಷಣ ಹಕ್ಕು ನಿಯಮಗಳು (2012), ಕನ್ನಡ ಕಲಿಕಾ ಅಧಿನಿಯಮ 2015 ಮತ್ತು ಕನ್ನಡ ಕಲಿಕಾ ನಿಯಮಗಳು 2017 ನ್ನು ಪೂರ್ಣ ಉಲ್ಲಂಘಿಸಿದೆ’ ಎಂದು ನಾಗಾಭರಣ ಹೇಳಿದರು.