‘ಬೆಂಗಳೂರು ಅರಮನೆ ಮೈದಾನದ 28 ಎಕರರ ಜಮೀನನ್ನು ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ 1999-2000ರಿಂದ 2004-2005ರ ಅವಧಿಗೆ ₹ 183.33 ಕೋಟಿ ಸಂಪತ್ತು ತೆರಿಗೆ ಪಾವತಿಸಬೇಕು’ ಎಂದು ರಾಜಮನೆತನದ ಸಹೋದರಿಯರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಮೀನಾಕ್ಷಿ ದೇವಿ ಹಾಗೂ ಕಾಮಾಕ್ಷಿ ದೇವಿ ಆದಾಯ ತೆರಿಗೆ ಇಲಾಖೆ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.