ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಗರದ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೆಂಕಟಸ್ವಾಮಿ ಎಂಬುವವರಿಗೆ ಪೋಷಕರು ಹಾಗೂ ಸಾರ್ವಜನಿಕರು ಶಾಲೆಯಲ್ಲಿಯೇ ಥಳಿಸಿದ್ದಾರೆ.
ನಗರದ ಬಿಇಒ ಹಾಗೂ ಡಿಡಿಪಿಐ ಕಚೇರಿ ಆವರಣದ ಶಾಲೆಯ ಮುಂದೆ ಈ ವಿಚಾರವಾಗಿ ಶುಕ್ರವಾರ ಹಲವು ವಿದ್ಯಮಾನಗಳು ಜರುಗಿದವು. ಶಾಲೆ ಮುಂದೆ ಪೋಷಕರು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿಡಿಪಿಐ ಕಚೇರಿ ಆವರಣದಲ್ಲಿ ಸಂಜೆಯವರೆಗೂ ಚರ್ಚೆಗಳು ನಡೆಯುತ್ತಿದ್ದವು.