ಬೆಂಗಳೂರು: ವರ್ಗಾವಣೆಗೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಜಾರಿ ಆದೇಶವನ್ನು ಪಾಲಿಸಬೇಕೆ, ಬೇಡವೇ ಎಂಬ ಗೊಂದಲ ಮುಂದುವರಿದಿದ್ದು, ಇದೇ 21ರೊಳಗೆ ಎಲ್ಲರಿಗೂ ಒಟ್ಟಿಗೇ ‘ಮೂವ್ಮೆಂಟ್ ಆರ್ಡರ್’ ನೀಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಕೆ .ಜಿ. ಜಗದೀಶ್ ತಿಳಿಸಿದ್ದಾರೆ.