ಸುಳಿವು ನೀಡಿದ ಫಾಸ್ಟ್ಟ್ಯಾಗ್; ‘ಕೃತ್ಯಕ್ಕಾಗಿ ಆರೋಪಿಗಳು, ಸ್ನೇಹಿತರೊಬ್ಬರ ಕಾರು ಪಡೆದಿದ್ದರು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಆರಂಭಿಸಲಾಯಿತು. ಎಲೆಕ್ಟ್ರಾನಿಕ್ ಸಿಟಿ ಟೋಲ್ಗೇಟ್ ಮೂಲಕ ಕಾರು ಹಾದು ಹೋಗಿದ್ದು ಫಾಸ್ಟ್ಟ್ಯಾಗ್ನಿಂದ ತಿಳಿಯಿತು. ತಮಿಳುನಾಡಿಗೆ ಹೋದ ವಿಶೇಷ ತಂಡ, ಹೋಟೆಲೊಂದರಲ್ಲಿ ಆರೋಪಿಗಳನ್ನು ಬಂಧಿಸಿತು. ವಿನೀತ್ ಅವರನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದಿತು’ ಎಂದೂ ತಿಳಿಸಿದರು.