ಬೆಂಗಳೂರು: ಶಾಸ್ತ್ರೀಯ ಭಾಷೆ ತೆಲುಗು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ.ಡಿ.ಕೆ.ಪ್ರಭಾಕರ್ ಅವರಿಗೆ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ್ ರಾಷ್ಟ್ರಪತಿ ಪುರಸ್ಕಾರ–2019’ ಲಭಿಸಿದೆ ಎಂದು ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಆಶಾಜ್ಯೋತಿ ತಿಳಿಸಿದ್ದಾರೆ.