ಉತ್ಥಾನ ಮಾಸಪತ್ರಿಕೆಯು ದತ್ತೋಪಂತ ಠೇಂಗಡಿಯವರ ಜನ್ಮಶತಾಬ್ದಿಯ ನಿಮಿತ್ತ ಆನ್ಲೈನ್ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಹೋರಾಟಗಳು, ಘೋಷಣೆಗಳಿಂದ ಮಾತ್ರ ಸಂಘಟನೆ ಗಟ್ಟಿಗೊಳ್ಳುವುದಿಲ್ಲ. ಬದಲಾಗಿ ವ್ಯಕ್ತಿ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಪರ್ಕ, ಸಂವಾದದಿಂದ ಸಾಧ್ಯ ಎನ್ನುವುದನ್ನು ಠೇಂಗಡಿ ತೋರಿಸಿಕೊಟ್ಟರು. ಅವರಿಗೆ 2003ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿ, ಘೋಷಿಸಿತು. ಆದರೆ, ಅವರು ಪುರಸ್ಕಾರವನ್ನು ತಿರಸ್ಕರಿಸಿ, ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಸರ್ಕಾರಕ್ಕೆ ತಿಳಿಸಿದ್ದರು’ ಎಂದು ನೆನಪಿಸಿಕೊಂಡರು.