‘ಕನ್ನಡದ ಅಸ್ಮಿತೆಯ ನಾಡಗೀತೆ ಪದೇ ಪದೇ ವಿವಾದಕ್ಕೆ ಈಡಾಗುತ್ತಿರುವುದು ಈ ನಾಡಿನ ದುರಂತವೇ ಸರಿ. ಸಾರ್ವಕಾಲಿಕ ಶ್ರೇಷ್ಠ ಕವಿ, ದಾರ್ಶನಿಕ, ಸಾಹಿತಿ, ನಾಟಕಕಾರ, ವಿಶ್ವಮಾನವ ಕುವೆಂಪು ಅವರಿಗೆ ಮಾಡುತ್ತಿರುವ ಮಹಾ ಅವಮಾನ. ನಾಡಗೀತೆ ಘೋಷಣೆಯಾಗಿ ಸುಮಾರು 20 ವರ್ಷಗಳು ಸಮೀಪಿಸುತ್ತಿರುವಾಗ ಈ ಗೊಂದಲ ಬೇಕೆ? ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯೆ ಇದಕ್ಕೆ ಕಾರಣ. ಕುವೆಂಪು ಅವರು ತಮ್ಮ ರಚನೆಯನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕೆಂದು ಅರ್ಜಿ ಹಾಕಿದವರಲ್ಲ’ ಎಂದು ತಿಳಿಸಿದ್ದಾರೆ.