‘ಶಿಕ್ಷಣ ಕ್ಷೇತ್ರವನ್ನು ಹಿಂದೆಂದೂ ಇಷ್ಟು ಗೊಂದಲಕ್ಕೆ ತಳ್ಳಿದ ನಿದರ್ಶನ ಗಳು ನಮ್ಮ ರಾಜ್ಯದಲ್ಲಿ ಇಲ್ಲ. ಪಠ್ಯಪುಸ್ತಕಗಳ ಮರುಪರಿಷ್ಕರಣೆಯಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿ ಸಿರುವುದು ಸ್ಪಷ್ಟವಾಗಿದೆ. ತಾವು ಮಾಡಿದ ತಪ್ಪುಗಳು ಬಯಲಾಗುತ್ತಿದ್ದಂತೆ ವಿತಂಡವಾದವನ್ನು ಮಾಡುತ್ತ ಮತ್ತಷ್ಟು ತಪ್ಪು ಮಾಡುತ್ತಿರುವ ಮರುಪರಿಷ್ಕರಣೆಯ ಅಧ್ಯಕ್ಷರು ಮತ್ತು ಶಿಕ್ಷಣ ಸಚಿವರು ಇನ್ನಾದರೂ ಶೈಕ್ಷಣಿಕ ವಿವೇಕವನ್ನು ರೂಢಿಸಿಕೊಳ್ಳ ಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಜಾಯಿಷಿ ನೀಡುವ ಬದಲು ಮರುಷರಿಷ್ಕರಣೆಯ ಪಠ್ಯಗಳನ್ನು ರದ್ದು ಮಾಡಿ, ಈ ವರ್ಷಕ್ಕೆ ಬರಗೂರು ಸಮಿತಿಯ ಪುಸ್ತಕ
ಗಳನ್ನು ಮುಂದುವರಿಸಬೇಕು’ ಎಂದೂ ಆಗ್ರಹಿಸಿದೆ.