ರಾಜಾನುಕುಂಟೆ ಸಮೀಪದ ಅದ್ದೆ ವಿಶ್ವನಾಥಪುರ ಗ್ರಾಮದ ರೈತ ವಿ.ಆರ್.ನಾರಾಯಣರೆಡ್ಡಿ ಅವರು, ಅರಕೆರೆ ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು ₹ 70 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಇನ್ನೇನು ಬೆಳೆಯನ್ನು ಕಟಾವು ಮಾಡುವ ವೇಳೆಗೆ ಸಂಚಾರ ಮತ್ತು ಮಾರುಕಟ್ಟೆ ಸ್ಥಗಿತಗೊಂಡು, ಕೂಲಿಯಾಳುಗಳ ಸಮಸ್ಯೆಯೂ ಎದುರಾಯಿತು. ಇದರಿಂದ ಮಾರಾಟಕ್ಕೆ ಅವಕಾಶವಾಗದೆ ಟ್ರ್ಯಾಕ್ಟರ್ನಿಂದ ಬೆಳೆಯನ್ನು ನಾಶಪಡಿಸಿದ್ದಾರೆ.