ಲೇಖಕ ರಾಮ್ ಮಾಧವ್, ‘ನಾವೆಲ್ಲಾ ಸಿದ್ಧಾಂತದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಭಾರತವು ಕಲ್ಪನೆಗಳ ನಾಡು. ಜಗತ್ತಿಗೆ ಅಹಿಂಸೆ ಮತ್ತು ಸತ್ಯಾಗ್ರಹದಂತಹ ಪರಿಕಲ್ಪನೆಗಳನ್ನು ಕೊಡುಗೆಯಾಗಿ ನೀಡಿದ ದೇಶ ನಮ್ಮದು. ಸಿದ್ಧಾಂತವೊಂದು ಜನರಿಗೆ ಅರ್ಥವಾಗಿ ಅದು ಕಾರ್ಯಗತಗೊಳ್ಳಲು ವರ್ಷಗಳೇ ಬೇಕಾಗುತ್ತದೆ. ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡೆರಿಕ್ ಏಂಗೆಲ್ಸ್ ಅವರು ‘ದಾಸ್ ಕ್ಯಾಪಿಟಲ್’ ಕೃತಿ ರಚಿಸಿ 50 ವರ್ಷಗಳ ಬಳಿಕ ಸೋವಿಯತ್ ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ದೀನದಯಾಳ್ ಉಪಾಧ್ಯಾಯ ಅವರು ಭಾರತೀಯತೆಯನ್ನು ಪ್ರತಿಪಾದಿಸಿದರು. ಅವರ ಪರಿಕಲ್ಪನೆಗಳು ಜಾರಿಗೊಳ್ಳಲು ದಶಕಗಳೇ ಬೇಕಾಯಿತು. ದೇಶದ ಈಗಿನ ಆಡಳಿತದಲ್ಲಿ ಅವರ ಚಿಂತನೆಗಳು ಎದ್ದುಕಾಣುತ್ತಿವೆ’ ಎಂದರು.