‘ಕೆಂಗೇರಿ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, 2020ರ ಏಪ್ರಿಲ್ 8ರಂದು ರಾತ್ರಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಕಿಟಕಿ ಬಳಿಯ ಕುರ್ಚಿ ಮೇಲಿಟ್ಟು ಮಲಗಿದ್ದರು. ಮರುದಿನ ಎದ್ದು ನೋಡಿದಾಗ ಚಿನ್ನದ ಸರವೇ ಇರಲಿಲ್ಲ. ಸರ ಕಳುವಾದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗಲೇ ಆರೋಪಿ ಸಿಕ್ಕಿಬಿದ್ದ. ಆತನೇ ರಾತ್ರಿ ಕಿಟಕಿ ಬಳಿ ಬಂದು ಸರ ಕದ್ದಿರುವುದಾಗಿ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.