‘ಕೆಲ ಯುವಕರು, ಮನೆ ಬಳಿ ಹೋಗಿ ನೋಡಿದ್ದರು. ದೇವರ ಕೊಠಡಿ ಸೇರಿದ್ದ ಆರೋಪಿ, ಮನೆಯಲ್ಲಿ ದೆವ್ವ ಇರುವುದಾಗಿ ಕಥೆ ಕಟ್ಟಿದ್ದ. ಸ್ಥಳೀಯರು ಹಿಡಿಯಲು ಹೋದಾಗ, ಮನೆಯಿಂದ ಹೊರಗೆ ಓಡಿದ್ದ. ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ನಂತರ, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ವಶಕ್ಕೆ ಆರೋಪಿಯನ್ನು ಒಪ್ಪಿಸಿದ್ದಾರೆ' ಎಂದೂ ತಿಳಿಸಿದರು. ‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನ ಪೂರ್ವಾಪರ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಹೇಳಿದರು.