ವಿಮರ್ಶಕನಟರಾಜ ಹುಳಿಯಾರ್, ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಘೋಷಿಸಲಾಗುತ್ತದೆ. ಆದರೆ, ನಮ್ಮ ಹಳ್ಳಿಗಳ ಸ್ಥಿತಿ ಮಾತ್ರ ಸ್ವಲ್ಪವೂ ಬದಲಾಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಗ್ರಾಮಗಳನ್ನು ನೋಡುವ ಕಣ್ಣುಗಳು ಇಲ್ಲವಾಗಿವೆ.ಕಥೆಗಾರ ಅಥವಾ ಕಥೆಗಾರ್ತಿ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಕರೀಗೌಡ ಅವರರ ಕಥೆಗಳಲ್ಲಿ ಹಳ್ಳಿಯ
ಮುಗ್ಧತೆ ಕಾಣಬಹುದು’ ಎಂದು ತಿಳಿಸಿದರು.