‘₹ 3 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದ ಮಹಿಳಾ ಉದ್ಯಮಿ ಹಾಗೂ ಪತಿ, ಬ್ಯಾಂಕ್ನಿಂದ ಹೊರಬಂದು ಕಾರಿನಲ್ಲಿ ಕುಳಿತು ಮನೆಯತ್ತ ಹೊರಟಿದ್ದರು. ಆರೋಪಿಯೊಬ್ಬ ಬೈಕ್ನಲ್ಲಿ ಅವರ ಕಾರು ಹಿಂಬಾಲಿಸುತ್ತಿದ್ದ. ಶಂಕರಮಠ ಜಂಕ್ಷನ್ ಬಳಿ ಕಾರು ನಿಲ್ಲಿಸಿದ್ದ
ಆರೋಪಿ, ‘ನಿಮ್ಮ ಕಾರಿನ ಚಕ್ರ ಪಂಕ್ಚರ್ ಆಗಿದೆ’ ಎಂದಿದ್ದ. ಕೆಳಗೆ ಇಳಿದು ಚಾಲಕ ಪರಿಶೀಲಿಸಿದಾಗ, ಪಂಕ್ಚರ್ ಗಮನಕ್ಕೆ ಬಂದಿತ್ತು. ನಂತರ, ಸಮೀಪದಲ್ಲೇ ಇದ್ದ ಪಂಕ್ಚರ್ ಅಂಗಡಿಯತ್ತ ಚಾಲಕ ಕಾರು ಚಲಾಯಿಸಿಕೊಂಡು ಹೋಗಿದ್ದ. ಆರೋಪಿಯು ಕಾರಿನ ಬಳಿಯೇ
ಸುತ್ತಾಡುತ್ತಿದ್ದ.’