ಅರ್ಜುನ್ ಟೂರ್ ಆಂಡ್ ಟ್ರಾವೆಲ್ ಸಂಸ್ಥೆಯ ಈ ಪ್ಯಾಕೇಜ್ ಆರಂಭಿಸಿದೆ. ‘ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೆ ಕಂಬಳದ ಫೋಟೊಗಳನ್ನು ಕಳುಹಿಸಿದ್ದರು. ಕೂಡಲೇ ಕರಾವಳಿ ಕರ್ನಾಟಕದ ಈ ಕಲೆಯನ್ನು ರಾಜ್ಯ, ದೇಶದ ವಿವಿಧ ಭಾಗಗಳಜನರು, ವಿದೇಶಿಗರಿಗೂ ಪರಿಚಯಿಸಬೇಕು ಎನ್ನುವ ಆಲೋಚನೆ ಮೂಡಿತ್ತು. ಈ ಬಗ್ಗೆ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಅವರನ್ನು ಸಂಪರ್ಕಿಸಿದೆ. ನಂತರ ಎರಡು ದಿನಗಳ ಕಂಬಳ ಪ್ಯಾಕೇಜ್ ಆರಂಭಿಸಿದೆ’ ಎನ್ನುತ್ತಾರೆ ಸಂಸ್ಥೆಯರವಿ ಎಂ.