ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಗಣೇಶ್‌ಗೆ ₹75 ಲಕ್ಷ ಪರಿಹಾರ ನೀಡಿ

ಮೋಕ್ಷ್‌ ಅಗರಬತ್ತಿ ಕಂಪನಿಗೆ ನ್ಯಾಯಾಲಯ ಸೂಚನೆ
Last Updated 3 ಏಪ್ರಿಲ್ 2018, 6:00 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತಿಗೆ ಅನುಮತಿ ಪಡೆಯದೆಯೇ ಚಿತ್ರ ಬಳಸಿಕೊಂಡಿದ್ದ ಪ್ರಕರಣ ಸಂಬಂಧ ನಟ ಗಣೇಶ್‌ಗೆ ₹ 75 ಲಕ್ಷ ಪರಿಹಾರ ನೀಡುವಂತೆ ಮೋಕ್ಷ್ ಅಗರಬತ್ತಿ ಕಂಪನಿಗೆ 15ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಮಾಡಿದೆ.

ಆದೇಶ ಪ್ರಕಟಗೊಂಡ 60 ದಿನಗಳ ಒಳಗೆ ಪರಿಹಾರ ನೀಡಬೇಕು ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ಗಣೇಶ್ ಪರ ವಕೀಲರು ತಿಳಿಸಿದರು.

ಪ್ರಕರಣದ ಹಿನ್ನೆಲೆ: ಗಣೇಶ್ ಅಭಿನಯದ ‘ಚೆಲುವಿನ ಚಿತ್ತಾರ’ ಸಿನಿಮಾದ ನಿರ್ದೇಶಕ ಎಸ್.ನಾರಾಯಣ್ ಅವರು ಮೋಕ್ಷ್ ಅಗರಬತ್ತಿ ಕಂಪನಿ ಜತೆ ಜಾಹೀರಾತು ಪ್ರಕಟ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು. ಅದರನ್ವಯ ಸಿನಿಮಾದ ಚಿತ್ರಗಳನ್ನು ಮಾತ್ರ ಜಾಹೀರಾತಿಗೆ ಬಳಸಿಕೊಳ್ಳಬಹುದಾಗಿತ್ತು.

ಆದರೆ, ಆ ಸಿನಿಮಾದ ಚಿತ್ರಗಳನ್ನು ಹೊರತುಪಡಿಸಿ ಬೇರೆ ಚಿತ್ರಗಳನ್ನೂ ಜಾಹೀರಾತಿಗಾಗಿ ಕಂಪನಿ ಬಳಸಿಕೊಂಡಿದೆ ಎಂದು ಆರೋಪಿಸಿ ಗಣೇಶ್ 2008ರಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT