‘ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದೇನೆ. ದೊಮ್ಮಸಂದ್ರದ ಬೇರೆ ವಾರ್ಡ್ಗಳಿಗೆ ಹೋಲಿಸಿದರೆ 13ನೇ ವಾರ್ಡ್ನಲ್ಲಿ ಬಹಳಷ್ಟು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಇದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿಸಿದ್ದರು. ಮಂಗಳಮುಖಿಯರೆಲ್ಲ ಸೇರಿಕೊಂಡು ಅವರಿಗೆ ದವಸ ಧಾನ್ಯ, ಆಹಾರದ ಕಿಟ್ ಪೂರೈಕೆ ಮಾಡಿದ್ದೆವು. ಚುನಾವಣೆ ಬಂದಾಗ ಸ್ಪರ್ಧಿಸುವಂತೆ ಜನರೇ ಹೇಳಿದ್ದರು. ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿ ಅವರೇ ನನ್ನ ಪರ ಪ್ರಚಾರ ನಡೆಸಿದ್ದರು. ಈಗ ಅವರೇ ಗೆಲ್ಲಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.