ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಮಂಗಳಮುಖಿ ಗ್ರಾ.ಪಂ. ಸದಸ್ಯೆ

Last Updated 1 ಜನವರಿ 2021, 2:39 IST
ಅಕ್ಷರ ಗಾತ್ರ

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 13ನೇ ವಾರ್ಡ್‌ನ ಸದಸ್ಯರಾಗಿ ಮಂಗಳಮುಖಿ ಆರತಿ ಜವರಗೌಡ ಆಯ್ಕೆಯಾಗಿದ್ದಾರೆ.

ಅರ್ಹ 778 ಮತಗಳ ಪೈಕಿ 527 ಮತಗಳನ್ನು ಪಡೆದಿರುವ ಅವರು, ಉಳಿದ ಅಭ್ಯರ್ಥಿಗಳಿಗಿಂತ ಶೇ 80ಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಬೇರೆ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ಆದರೆ, ಯಾವುದೇ ಬೆಂಬಲವಿಲ್ಲದೆ, ಜನ ಬಲದಿಂದಲೇ ಈ ಗೆಲುವು ಸಾಧಿಸಿದ್ದೇನೆ’ ಎಂದು ಆರತಿ ‘ಪ್ರಜಾವಾಣಿ’ಗೆ ಹೇಳಿದರು.

‘ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದೇನೆ. ದೊಮ್ಮಸಂದ್ರದ ಬೇರೆ ವಾರ್ಡ್‌ಗಳಿಗೆ ಹೋಲಿಸಿದರೆ 13ನೇ ವಾರ್ಡ್‌ನಲ್ಲಿ ಬಹಳಷ್ಟು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಇದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿಸಿದ್ದರು. ಮಂಗಳಮುಖಿಯರೆಲ್ಲ ಸೇರಿಕೊಂಡು ಅವರಿಗೆ ದವಸ ಧಾನ್ಯ, ಆಹಾರದ ಕಿಟ್‌ ಪೂರೈಕೆ ಮಾಡಿದ್ದೆವು. ಚುನಾವಣೆ ಬಂದಾಗ ಸ್ಪರ್ಧಿಸುವಂತೆ ಜನರೇ ಹೇಳಿದ್ದರು. ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿ ಅವರೇ ನನ್ನ ಪರ ಪ್ರಚಾರ ನಡೆಸಿದ್ದರು. ಈಗ ಅವರೇ ಗೆಲ್ಲಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮಂಗಳಮುಖಿಯಾಗಿದ್ದರೂ ಇಷ್ಟೆಲ್ಲ ಜನಸೇವೆ ಮಾಡಿದ್ದೀರಿ. ನಿಮ್ಮಂಥವರು ಪಂಚಾಯಿತಿ ಸದಸ್ಯರಾದರೆ ನಮ್ಮ ವಾರ್ಡ್‌ ಕೂಡ ಅಭಿವೃದ್ಧಿ ಆಗುತ್ತದೆ ಎಂದು ಜನ ಹೇಳಿದ್ದರು. ಪ್ರಚಾರಕ್ಕೆ ಬರುವುದೇ ಬೇಡ. ನಾವೇ ಎಲ್ಲ ನೋಡಿಕೊಳ್ಳುತ್ತೇವೆ ಎಂದು ಜನ ಭರವಸೆ ನೀಡಿದ್ದರು’ ಎಂದರು.

‘ನಮಗೆ ನೂರಾರು ಜನ ಸಹಾಯ ಮಾಡುತ್ತಾರೆ. ನಾವು ಹತ್ತು ಜನಕ್ಕಾದರೂ ಸೇವೆ ಸಲ್ಲಿಸಬೇಕು ಉದ್ದೇಶವಿತ್ತು. ಅದರಂತೆ ಕೈಲಾದ ಸಹಾಯ ಮಾಡಿದ್ದೆ. ವಾರ್ಡ್‌ನ ಜನ ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ವಾರ್ಡ್‌ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT