ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಪಿ ಕಾರಿನ ಮೇಲೆ ಬಿದ್ದ ಮರದ ಕೊಂಬೆ: ಚಾಲಕ ಪಾರು

Last Updated 4 ಸೆಪ್ಟೆಂಬರ್ 2022, 22:08 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಕಾರು ಭಾಗಶಃ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

‘ಡಿಸಿಪಿ ಕಚೇರಿ ಆವರಣದಲ್ಲಿ ಮರವಿದೆ. ಮಳೆ, ಗಾಳಿಯಿಂದಾಗಿ ಮರದ ಕೊಂಬೆ ಸಡಿಲಗೊಂಡಿತ್ತು. ಅದೇ ಕೊಂಬೆ ಏಕಾಏಕಿ ಮುರಿದು ಬಿದ್ದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶನಿವಾರ ಕಚೇರಿಗೆ ಡಿಸಿಪಿ ಅವರನ್ನು ಕರೆತಂದಿದ್ದ ಚಾಲಕ, ಡಿಸಿಪಿ ಕಚೇರಿಗೆ ತೆರಳಿದ ಬಳಿಕ ಕಾರಿನಲ್ಲಿ ಕುಳಿತಿದ್ದರು. ಮೊಬೈಲ್‌ ಕರೆ ಬಂದಿದ್ದು, ಇಳಿದು ಮಾತನಾಡುತ್ತ ಬೇರೆಡೆ ತೆರಳಿದ್ದರು. ಆಗ ಕೊಂಬೆ ಬಿದ್ದಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT