42 ರಂಧ್ರ: ‘ಮರದ ಬುಡದಲ್ಲಿ ಒಟ್ಟು 42 ರಂಧ್ರಗಳನ್ನು ಕೊರೆಯಲಾಗಿದೆ. ಬುಡವನ್ನು ಸ್ವಚ್ಛಗೊಳಿಸಿ ಸುಣ್ಣ ಬೆರೆಸಿದ ನೀರನ್ನು ಉಣಿಸುವ ಮೂಲಕ ಬುಡಕ್ಕೆ ಸುರಿದ ಆ್ಯಸಿಡ್ನಿಂದ ಆಗುವ ಹಾನಿ ಕಡಿಮೆಗೊಳಿಸಲು ಪ್ರಯತ್ನಿಸಿದ್ದೇವೆ. 15 ದಿನಗಳಲ್ಲಿ ಮರಕ್ಕೆ ಪೋಷಕಾಂಶಗಳನ್ನು ಉಣಿಸುತ್ತೇನೆ’ ಎಂದು ವಿಜಯ್ ನಿಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.