ಕವಿ ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ‘ಸಮಾಜವಾದಿ ಕಲಾವಿದರಾಗಿದ್ದ ನಾಯರಿ ಅವರು, ಜೀವನದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ರಂಗಭೂಮಿಯಲ್ಲಿ ಅನಿರೀಕ್ಷಿತ ಚಮತ್ಕಾರ ಮಾಡುತ್ತಿದ್ದರೂ ಜನಪ್ರಿಯರಾಗಲಿಲ್ಲ. ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನವೂ ಸಿಗಲಿಲ್ಲ. ಅವರು, ಅಕಾಡೆಮಿ ಅಧ್ಯಕ್ಷರಾಗಿದ್ದರೆ ರಂಗಭೂಮಿಗೆ ಹೊಸ ಸ್ವರೂಪ ದೊರೆಯುತ್ತಿತ್ತು. ಅವರ ಕಲಾ ಪ್ರತಿಭೆಗೆ ಪ್ರಶಸ್ತಿಗಳೂ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.