ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ತುಳು ಸಾಹಿತಿಗಳಾದ ಕುಶಲಾಕ್ಷಿ ವಿ. ಕಣ್ವತೀರ್ಥ, ಸಮಾಜ ಸೇವೆಗಾಗಿ ರವಿ ಕಟಪಾಡಿ ಮತ್ತು ಪ್ರಕಾಶ್ ಜೆ. ಶೆಟ್ಟಿಗಾರ್ ಅವರಿಗೆ ‘ತುಳುನಾಡ್ದ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಕೆ.ಇ. ರಾಧಾಕೃಷ್ಣ ಅವರ ‘ಸತ್ಯಪ್ಪೆ ಬಾಲೆಲು’ ತುಳು ಕಥೆಯ ಆಡಿಯೊ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ ತುಳು ಸಾಹಿತಿ ಉಗಪ್ಪ ಪೂಜಾರಿ (ತುಳು– ಕನ್ನಡ ಸಾಹಿತಿ ಡಿ.ಕೆ. ಚೌಟ ಅವರ ಸಂಸ್ಮರಣಾರ್ಥ) ಮತ್ತು ಯುವ ಪ್ರತಿಭೆ ಸತೀಶ್ ಅಗ್ಪಲ್ (ಸಾಮಾಜಿಕ ಚಿಂತಕ, ತುಳು ಹೋರಾಟಗಾರ ಡಾ. ಉದಯ ಧರ್ಮಸ್ಥಳ ಸಂಸ್ಮರಣಾರ್ಥ) ಪ್ರಶಸ್ತಿ ನೀಡಲಾಯಿತು.