‘ಸಂಚಾರ ನಿರ್ಬಂಧಿಸಲುತಾಂತ್ರಿಕ ಕಾರಣಗಳೇನು, ಸೇತುವೆಯ ಸ್ಥಿತಿಗತಿ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಮ್ಮದಾಗಿತ್ತು. ಸಮಿತಿಯನ್ನೇ ನೇಮಿಸಿಲ್ಲ, ವರದಿಯೂ ಇಲ್ಲ ಎಂಬ ಉತ್ತರ ಬಂದಿದೆ. ಕಳಪೆ ಕಾಮಗಾರಿ ವಿಷಯ ಗಂಭೀರವಾಗಿ ಇರುವುದರಿಂದ ವರದಿ ಇದ್ದರೂ ಎನ್ಎಚ್ಎಐ ಮುಚ್ಚಿಡುತ್ತಿರಬಹುದು ಅಥವಾ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿರಬಹುದು. ಒಟ್ಟಾರೆ ಎಲ್ಲವೂ ಅಸ್ಪಷ್ಟ. ಜನ ಮಾತ್ರ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವುದು ಮತ್ತು ಸುಂಕ ಕಟ್ಟುವುದು ಮುಂದುವರಿದಿದೆ’ ಎಂದರು.