ಪೂರ್ವ, ವಾಯವ್ಯ ಹಾಗೂ ಉತ್ತರ ವಿಭಾಗಗಳಲ್ಲಿ ವೈಟ್ಫೀಲ್ಡ್, ಅಂಬೇಡ್ಕರ್ ನಗರ, ಅಯ್ಯಪ್ಪನಗರ, ಪೈ ಲೇಔಟ್, ಗರುಡಾಚಾರ್ ಪಾಳ್ಯ, ಪಾಪರೆಡ್ಡಿ ಪಾಳ್ಯ, ಜಿಸಿ ಪಾಳ್ಯ, ಐಟಿಪಿಎಲ್ ಮುಖ್ಯ ರಸ್ತೆ, ಕುಂದನಹಳ್ಳಿ, ಕಾಡುಗೋಡಿ, ಚಿನ್ನಪ್ಪನಹಳ್ಳಿ, ತಿಗಳರಪಾಳ್ಯ, ಮುನೇನಕೊಳಲು, ಅಶ್ವತ್ಥ್ ನಗರ, ಚೊಕ್ಕಸಂದ್ರ, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಟ್ಟಡಗಳು ಇವೆ. ನಗರದ ಮಳೆನೀರು ಕಾಲುವೆಗಳಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಕಾಲುವೆಗಳ ಮೂಲಕ ತ್ಯಾಜ್ಯದ ನೀರು ಕೆರೆಗಳಿಗೆ ಹರಿದು ಕೆರೆಯ ನೀರೂ ಕಲುಷಿತವಾಗುತ್ತಿದೆ.