ಪೀಣ್ಯ 2ನೇ ಹಂತದ ಕೆಂಪೇಗೌಡ ಲೇಔಟ್ನ ಆರ್. ರಂಗಸ್ವಾಮಿ (49) ಹಾಗೂ ಟಿ. ದಾಸರಹಳ್ಳಿಯ ರವೀಂದ್ರ ನಗರದ ಕೇಶವಪ್ಪ (39) ಬಂಧಿತರು. ದಾಸನಪುರ ಹಾಗೂ ಲಗ್ಗೆರೆ ಉಪ ನೋಂದಣಾಧಿಕಾರಿ ಕಚೇರಿಗಳ ಬಳಿ ಕೆಲಸ ಮಾಡುವ ಆರೋಪಿಗಳು, ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ನಿವೇಶನ ಮಾರಾಟ ಮಾಡಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.