ಸುಂದರಿಯರು, ಕ್ಲಬ್ ಹಾಗೂ ಪೌಂಡೇಷನ್ ಸದಸ್ಯರುಗಳು ಮಕ್ಕಳೊಂದಿಗೆ ಬೆರೆತು ಮಕ್ಕಳಾದರು. ಗ್ರಾಮೀಣ ಆಟಗಳಾದ ಹಸು ಕರು, ಕುಂಟಾಬಿಲ್ಲೆ, ಕಬ್ಬಡಿ, ಲಗೋರಿ, ಚಿನ್ನಿದಾಂಡು, ಕೆರೆದಡ ಆಟಗಳನ್ನು ಮಕ್ಕಳೊಂದಿಗೆ ಆಡಿ ನಲಿದರು. ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ,ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಕಾಯದರ್ಶಿ ಗೀತಾ, ಸೌಂದರ್ಯ ಸ್ಪರ್ಧೆಯ ಸ್ಪರ್ಧಿಉಜ್ವಲಾ ಮಾತನಾಡಿದರು.ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಅಧ್ಯಕ್ಷ ಟಿ.ಶಿವಕುಮಾರ್, ಚಂದ್ರಶೇಖರ್, ಪ್ರದೀಪ್ ಕುಮಾರ್, ಆಂಟೋನಿ ಜೋಸೆಫ್ ಹಾಜರಿದ್ದರು.