‘ವರಮಹಾಲಕ್ಷ್ಮಿ ಹಬ್ಬ ವಿಜೃಂಭಣೆಯಾಗಿ ಆಚರಿಸುವ ಹಬ್ಬಗಳಲ್ಲೊಂದು. ಆದರೆ, ಈ ಬಾರಿ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ. ಹಬ್ಬದ ವೇಳೆ ಖರೀದಿಗೆ ಜನಜಂಗುಳಿ ಇರುತ್ತಿದ್ದ ಕೆ.ಆರ್.ಮಾರುಕಟ್ಟೆ ಸೀಲ್ಡೌನ್ ಆಗಿದೆ. ಹಾಗಾಗಿ, ಹಬ್ಬದ ಪ್ರಯುಕ್ತ ಹೂವು, ಹಣ್ಣಿನ ವ್ಯಾಪಾರಿಗಳು ನಗರದ ವಿವಿಧ ಪ್ರದೇಶಗಳಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆದುಕೊಂಡು ವ್ಯಾಪಾರ ನಡೆಸುತ್ತಿದ್ದೇವೆ’ ಎಂದವರು ಹೇಳಿದರು.