ಬೆಂಗಳೂರು: ರಸ್ತೆಬದಿ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ಹೊಡೆದು ಜಖಂ ಮಾಡಿರುವ ಆರೋಪದಡಿ ಇಬ್ಬರು ಬಾಲಕರನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಠಾಣೆ ವ್ಯಾಪ್ತಿಯಲ್ಲಿ ಸುತ್ತಾಡಿದ್ದ ಬಾಲಕರು, 6 ಕಾರು ಹಾಗೂ 1 ಆಟೊಕ್ಕೆ ಬಾಲಕರು ಕಲ್ಲು ಹೊಡೆದಿದ್ದರು. ಇದರಿಂದ ವಾಹನಗಳ ಗಾಜು ಒಡೆದಿದ್ದು, ಹಾನಿಯೂ ಆಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೃತ್ಯ ಎಸಗಲು ಕಾರಣ ಗೊತ್ತಾಗಿಲ್ಲ. ಬಾಲಕರು, ಡ್ರಗ್ಸ್ ಅಮಲಿನಲ್ಲಿದ್ದ ಶಂಕೆಯೂ ಇದೆ‘ಎಂದರು.