<p><strong>ಬೆಂಗಳೂರು</strong>: ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರ ಹೊರವರ್ತುಲ ರಸ್ತೆಯ ರ್ಯಾಂಪ್ನ ಕೆಂಪೇಗೌಡ ಕೆಳಸೇತುವೆ ಬಳಿ, ರೈಲ್ವೆ ಇಲಾಖೆಯಿಂದ ಕಬ್ಬಿಣದ ಪ್ಲೇಟ್ಗಳ ಮೇಲೆ ಕಾಂಕ್ರೀಟ್ ಹಾಕುವ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ಭಾಗದಲ್ಲಿ 10 ದಿನ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ.</p>.<p><strong>ವಾಹನ ಸಂಚಾರ ನಿರ್ಬಂಧ:</strong> ಕಸ್ತೂರಿನಗರ ಹೊರವರ್ತುಲ ಸರ್ವಿಸ್ ರಸ್ತೆಯ (ಕೆಂಪೇಗೌಡ ಕೆಳಸೇತುವೆ) ರಾಮಮೂರ್ತಿನಗರ ಕಡೆಯಿಂದ ಹಾಗೂ ಸದಾನಂದನಗರ ಕಡೆಯಿಂದ ವಿಜಿನಾಪುರ ಎಫ್ಸಿಐ ಗೋದಾಮು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.</p>.<p><strong>ಪರ್ಯಾಯ ಮಾರ್ಗ:</strong> ರಾಮಮೂರ್ತಿನಗರ ಜಂಕ್ಷನ್ ಮೂಲಕ ವಿಜಿನಾಪುರ ಕಡೆಗೆ ಸಂಚರಿಸುವವರು ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ನೇರವಾಗಿ ಚಲಿಸಿ, ಎಫ್ಸಿಐ ರಸ್ತೆಯ ಕಡೆಗೆ ಬಲಕ್ಕೆ ತಿರುವು ಪಡೆದು ವಿಜಿನಾಪುರ ಕಡೆಗೆ ಸಂಚರಿಸಬಹುದು.</p>.<p>ಸದಾನಂದನಗರ ಕಡೆಯಿಂದ ವಿಜಿನಾಪುರ ಕಡೆಗೆ ಹೋಗುವ ವಾಹನ ಸವಾರರು ಕಸ್ತೂರಿ ನಗರದ ಎರಡನೇ ಕ್ರಾಸ್ ಮೂಲಕ ರಾಮಮೂರ್ತಿನಗರ ಜಂಕ್ಷನ್ ತಲುಪಿ ವಿಜಿನಾಪುರ ಕಡೆಗೆ ಸಂಚರಿಸಬಹುದು.</p>.<p>ವಿಜಿನಾಪುರ ಕಡೆಯಿಂದ ಕೆಂಪೇಗೌಡ ಕೆಳಸೇತುವೆ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸುವವರು ವಿಜಿನಾಪುರ ರಸ್ತೆಯ ಮೂರನೇ ‘ಎ’ ಕ್ರಾಸ್ ರಸ್ತೆಯ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸಬಹುದು.</p>.<p class="Subhead">ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆ: ಕಸ್ತೂರಿನಗರ ಹೊರವರ್ತುಲ ರಸ್ತೆ (ರಾಮಮೂರ್ತಿನಗರ ಸರ್ವಿಸ್ ರಸ್ತೆಯಿಂದ ಕಸ್ತೂರಿನಗರ ಸರ್ವಿಸ್ ರಸ್ತೆವರೆಗೆ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರ ಹೊರವರ್ತುಲ ರಸ್ತೆಯ ರ್ಯಾಂಪ್ನ ಕೆಂಪೇಗೌಡ ಕೆಳಸೇತುವೆ ಬಳಿ, ರೈಲ್ವೆ ಇಲಾಖೆಯಿಂದ ಕಬ್ಬಿಣದ ಪ್ಲೇಟ್ಗಳ ಮೇಲೆ ಕಾಂಕ್ರೀಟ್ ಹಾಕುವ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ಭಾಗದಲ್ಲಿ 10 ದಿನ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ.</p>.<p><strong>ವಾಹನ ಸಂಚಾರ ನಿರ್ಬಂಧ:</strong> ಕಸ್ತೂರಿನಗರ ಹೊರವರ್ತುಲ ಸರ್ವಿಸ್ ರಸ್ತೆಯ (ಕೆಂಪೇಗೌಡ ಕೆಳಸೇತುವೆ) ರಾಮಮೂರ್ತಿನಗರ ಕಡೆಯಿಂದ ಹಾಗೂ ಸದಾನಂದನಗರ ಕಡೆಯಿಂದ ವಿಜಿನಾಪುರ ಎಫ್ಸಿಐ ಗೋದಾಮು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.</p>.<p><strong>ಪರ್ಯಾಯ ಮಾರ್ಗ:</strong> ರಾಮಮೂರ್ತಿನಗರ ಜಂಕ್ಷನ್ ಮೂಲಕ ವಿಜಿನಾಪುರ ಕಡೆಗೆ ಸಂಚರಿಸುವವರು ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ನೇರವಾಗಿ ಚಲಿಸಿ, ಎಫ್ಸಿಐ ರಸ್ತೆಯ ಕಡೆಗೆ ಬಲಕ್ಕೆ ತಿರುವು ಪಡೆದು ವಿಜಿನಾಪುರ ಕಡೆಗೆ ಸಂಚರಿಸಬಹುದು.</p>.<p>ಸದಾನಂದನಗರ ಕಡೆಯಿಂದ ವಿಜಿನಾಪುರ ಕಡೆಗೆ ಹೋಗುವ ವಾಹನ ಸವಾರರು ಕಸ್ತೂರಿ ನಗರದ ಎರಡನೇ ಕ್ರಾಸ್ ಮೂಲಕ ರಾಮಮೂರ್ತಿನಗರ ಜಂಕ್ಷನ್ ತಲುಪಿ ವಿಜಿನಾಪುರ ಕಡೆಗೆ ಸಂಚರಿಸಬಹುದು.</p>.<p>ವಿಜಿನಾಪುರ ಕಡೆಯಿಂದ ಕೆಂಪೇಗೌಡ ಕೆಳಸೇತುವೆ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸುವವರು ವಿಜಿನಾಪುರ ರಸ್ತೆಯ ಮೂರನೇ ‘ಎ’ ಕ್ರಾಸ್ ರಸ್ತೆಯ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸಬಹುದು.</p>.<p class="Subhead">ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆ: ಕಸ್ತೂರಿನಗರ ಹೊರವರ್ತುಲ ರಸ್ತೆ (ರಾಮಮೂರ್ತಿನಗರ ಸರ್ವಿಸ್ ರಸ್ತೆಯಿಂದ ಕಸ್ತೂರಿನಗರ ಸರ್ವಿಸ್ ರಸ್ತೆವರೆಗೆ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>