ಸುತ್ತೋಲೆಯಲ್ಲಿ ಏನಿದೆ: ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ–ನೌಕರರು ತಮ್ಮ ಸ್ವಂತ ವಾಹನವನ್ನು ವಿಕಾಸಸೌಧದ ವಾಹನ ನಿಲುಗಡೆ ತಾಣದಲ್ಲಿ ಹಲವು ದಿನಗಳಿಂದ ನಿಲ್ಲಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿಕಾಸಸೌಧ ಕಟ್ಟಡ ಹಿತದೃಷ್ಟಿಯಿಂದ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಇನ್ನು ಮುಂದೆ ಸ್ವಂತ ವಾಹನಗಳನ್ನು ರಾತ್ರಿ ವೇಳೆ ನಿಲ್ಲಿಸುವಂತಿಲ್ಲ. ರಾತ್ರಿ ವೇಳೆಯಲ್ಲಿ ಯಾವುದೇ ವಾಹನ ವಿಕಾಸಸೌಧದ ಕಟ್ಟಡದಲ್ಲಿ ಕಂಡುಬಂದರೆ, ಪೊಲೀಸರನ್ನು ಕರೆಸಿ ತೆರವುಗೊಳಿಸಲಾಗುವುದು.