‘ನಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಜಯಂತಿ ಸುತ್ತಾಡುತ್ತಿದ್ದರು. ಬೀಗ ಹಾಕಿರುತ್ತಿದ್ದ ಮನೆ ಕಾಣುತ್ತಿದ್ದಂತೆ, ಅದರ ಬಳಿ ಹೋಗುತ್ತಿದ್ದರು. ಬಾಗಿಲು ಎದುರು ನಿಂತು, ‘ಯಾರಾದರೂ ಇದ್ದೀರಾ’ ಎಂದು ಕೂಗುತ್ತಿದ್ದರು. ಪ್ರತಿಕ್ರಿಯೆ ಬಾರದಿದ್ದಾಗ, ಬೀಗ ಮುರಿದು ಮನೆಯೊಳಗೆ ಹೋಗುತ್ತಿದ್ದರು. ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದು ಕದ್ದುಕೊಂಡು ಪರಾರಿಯಾಗುತ್ತಿದ್ದರು’ ಎಂದೂ ತಿಳಿಸಿದರು.