ಜಲಮಂಡಳಿಯ ಸ್ಥಳೀಯ ಕಚೇರಿ ಬಳಿ ಸೇರಿದ್ದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನೀರು ಪೂರೈಕೆ ಮಾಡದಿದ್ದರೆ ಜಲಮಂಡಳಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. ಸ್ಥಳಕ್ಕೆ ಪೊಲೀಸರ ಜೊತೆ ಭೇಟಿ ನೀಡಿದ ಜಲಮಂಡಳಿ ಅಧಿಕಾರಿಗಳು, ‘ಯಂತ್ರಗಳು ಕೆಟ್ಟಿದ್ದರಿಂದ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಬದಲಿ ಯಂತ್ರಗಳನ್ನು ಅಳವಡಿಸಿ ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.